‘ರಾಜಕೀಯ ಕಾರಣಗಳಿಗೆಲೋಯಾ ಹತ್ಯೆಯಾಗಿದೆ ಎಂದು ಬಿಂಬಿಸಲಾಯಿತು. ಈ ಪ್ರಕರಣ ಮುಂದಿಟ್ಟು ಶಾ ವಿರುದ್ಧ ರಾಜಕೀಯ ಪಿತೂರಿ ನಡೆಸಲಾಯಿತು. ತನಿಖೆ ನಡೆಸುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಕೋರ್ಟ್ ವಜಾಗೊ ಳಿಸಿದ್ದು, ಕಾಂಗ್ರೆಸ್ ಬಣ್ಣ ಬಯಲಾಗಿದೆ. ಕಾಂಗ್ರೆಸ್ ದೇಶದ ಮುಂದೆ ಕ್ಷಮೆ ಕೇಳ ಬೇಕು’ ಎಂದೂ ಅವರು ಆಗ್ರಹಿಸಿದರು.