ಬಾಬಾಸಾಹೇಬ್ ಅವರು, ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ಮಂಗಳವಾರವೂ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದರು. ಅದರಂತೆ, ಜೆಡಿಎಸ್ ಚಿಹ್ನೆಯ ಧ್ವಜ ಹಿಡಿದು, ಪಟ್ಟಿ ಹಾಗೂ ಟೋಪಿ ಧರಿಸಿದ್ದ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಬಂದಿದ್ದರು. ಜೆಡಿಎಸ್ ಮುಖಂಡ, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಕೂಡ ಜೊತೆಗಿದ್ದರು. ಚುನಾವಣಾಧಿಕಾರಿ ಕಚೇರಿಗೆ ಬಂದಾಗಲೇ, ಇನ್ನೊಬ್ಬರಿಗೂ ಜೆಡಿಎಸ್ ‘ಬಿ ಫಾರಂ’ ನೀಡಲಾಗಿದೆ ಎನ್ನುವ ವಿಷಯ ಅವರಿಗೆ ತಿಳಿಯಿತು.