ಕಲಬುರ್ಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಗುತ್ತಿಗೆದಾರ ನೀಲಕಂಠರಾವ್ ಮೂಲಗೆ ಅವರ ಕಲಬುರ್ಗಿ ಮನೆ, ಚಿಂಚೋಳಿ ತಾಲ್ಲೂಕು ಸುಲೇಪೇಟದ ಕಾಂಗ್ರೆಸ್ ಮುಖಂಡ ಬಸವರಾಜ ವಿ.ಸಜ್ಜನ್ ಅವರ ಮನೆ, ಕಚೇರಿ ಮತ್ತು ಯಲಕಪಳ್ಳಿಯ ಜಲ್ಲಿಕಲ್ಲು ಘಟಕ ಹಾಗೂ ಕಲಬುರ್ಗಿ ತಾಲ್ಲೂಕು ಸಣ್ಣೂರದ ಬಿಜೆಪಿ ಮುಖಂಡ ಅರವಿಂದ ಚವಾಣ್ ಅವರ ಮನೆ ಮೇಲೆ ದಾಳಿ ಮಾಡಿದರು.