ಮಲಪ್ಪುರಂ, ಕೇರಳ: ಪತ್ರಿಕಾ ಛಾಯಾಗ್ರಾಹಕನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಆರ್ಎಸ್ಎಸ್ನ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ದಿಲೀಪ್ಕುಮಾರ್ (31) ಮತ್ತು ಶಿಬು (30) ಬಂಧಿತರು. ಆರ್ಎಸ್ಎಸ್ ಮೆರವಣಿಗೆ ನಡೆಯುತ್ತಿದ್ದ ವೇಳೆ ದ್ವಿಚಕ್ರ ವಾಹನ ಸವಾರನ ಮೇಲೆ ಈ ಇಬ್ಬರು ಹಲ್ಲೆ ಮಾಡಿದ ವಿಡಿಯೊ ಚಿತ್ರಿಕರಿಸಿದ ಕಾರಣಕ್ಕೆ, ಪತ್ರಿಕಾ ಛಾಯಾಗ್ರಾಹಕ ಫುಹಾದ್ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ.