‘ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು. ಅದರಲ್ಲೂ ಸಿದ್ದರಾಮಯ್ಯ ಹಾಗೂ ಸಚಿವೆ ಉಮಾಶ್ರೀ ಗೆಲುವಿಗಾಗಿ ವಿಶೇಷ ಪೂಜೆ ಮಾಡಿಸಿದ್ದೇವೆ’ ಎಂದು ಸಿದ್ದು ಗಂಜಾಳ, ಶಂಕರ್ ಬಣಕಾರ್ ತಿಳಿಸಿದರು. ‘ಕಳೆದ ವಿಧಾನಸಭಾ ಚುನಾವಣೆ ವೇಳೆ ಉಮಾಶ್ರೀ ಅವರ ಗೆಲುವಿಗೆ ಪ್ರಾರ್ಥಿಸಿ, ಬನಹಟ್ಟಿಯಿಂದ ಬಬಲಾದಿ ಮಠದವರೆಗೂ ದೀಡ್ ನಮಸ್ಕಾರ ಹಾಕಿದ್ದೆವು’ ಎಂದು ಇದೇ ವೇಳೆ ಸ್ಮರಿಸಿದರು.