ಅಭಿಮಾನಿಗಳ ಕಂಡು ಪುಳಕಿತ ರಾದ ಯಶ್, ‘ಅಣ್ತಮ್ಮಾ’ ಎಂದೇ ಮಾತು ಆರಂಭಿಸಿ, ‘ಜಿ.ಬಿ. ಜೋಶಿ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಿಮಿತ್ತ ಆಯೋಜಿಸಿದ್ದ ನಾಟಕದಲ್ಲಿ ಪಾಲ್ಗೊಳ್ಳಲು ಧಾರವಾಡಕ್ಕೆ ಬಂದಿದ್ದೆ. ನಂತರ ಬಂದಿರಲಿಲ್ಲ. ಈಗ ವಿನಯ ಕುಲಕರ್ಣಿ ಕರೆದುಕೊಂಡು ಬಂದಿದ್ದಾರೆ. ಜನರನ್ನು ಭೇಟಿ ಮಾಡಲು ಸಿಗುವ ಯಾವ ಅವಕಾಶವನ್ನೂ ಕಳೆದುಕೊಳ್ಳುವುದಿಲ್ಲ. ನೀವು ಖರೀದಿಸುವ ಒಂದೊಂದು ಟಿಕೆಟ್ನಿಂದ ಬೆಳೆದಿದ್ದೇನೆ’ ಎಂಬ ಮಾತಿಗೆ ಅಭಿಮಾನಿಗಳು ಕೇಕೆ, ಶಿಳ್ಳೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.