ಮಂಗಳೂರು: ಸ್ತ್ರೀಯರ ಸುರಕ್ಷತೆಯೇ ನಮ್ಮ ಆದ್ಯತೆ. ಅದಕ್ಕಾಗಿಯೇ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶನಿವಾರ ಸಂಜೆ ಇಲ್ಲಿನ ನೆಹರೂ ಮೈದಾನದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ತಡವಾಗಿ ಬರುವ, ಮೊಬೈಲ್ನಲ್ಲಿ ಮಾತನಾಡುವ ಹೆಣ್ಣು ಮಕ್ಕಳನ್ನು ಪ್ರಶ್ನಿಸುವ ಮನೋಭಾವವನ್ನು ಪಾಲಕರು ಬದಲಿಸಬೇಕು. ಮನೆಗೆ ತಡವಾಗಿ ಬರುವ ಗಂಡು ಮಕ್ಕಳನ್ನು ಪ್ರಶ್ನಿಸಿ ಎಂದು ಸಲಹೆ ನೀಡಿದರು.
ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್, ತ್ರಿವಳಿ ತಲಾಖ್ ರದ್ದುಪಡಿಸುವ ಮಸೂದೆಗೆ ರಾಜ್ಯಸಭೆಯಲ್ಲಿ ಒಪ್ಪಿಗೆ ಕೊಡದೇ ಇರುವುದು ಏಕೆ ಎಂದು ಪ್ರಶ್ನಿಸಿದರು.
ಇವಿಎಂಗಳಲ್ಲಿಯೂ ದೋಷ ಹುಡುಕುವ ಕಾಂಗ್ರೆಸ್ಸಿಗರಿಗೆ ಕರ್ನಾಟಕದ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಎನರ್ಜಿ (ಮತದಾರರ ಶಕ್ತಿ), ವ್ಯಾಲ್ಯೂ ಅಡಿಶನ್ (ಮತದಾರರ ಮೌಲ್ಯವರ್ಧನೆ) ಹಾಗೂ ಮೋಟಿವೇಶನ್ (ಮತದಾರರ ಪರಿವರ್ತನೆ) ಇದು ಇವಿಎಂನ ನಿಜವಾದ ಅರ್ಥ ಎಂದು ಬಣ್ಣಿಸಿದರು.