ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೊಸ ಕಾರಿನ ಮೇಲೆ ಕಾಗೆ ಕುಳಿತಿತು. ಅವರು ಕಾರು ಬದಲಿಸಿದರು. ಕಾಗೆ ಕುಳಿತ ದಿನವೇ ನಿಮ್ಮ ಜಾತಕ ಬದಲಾಯಿತು. ಕಾಗೆಗೆ ಹೆದರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜೇಬಲ್ಲಿ ನಿಂಬೆ ಹಿಡಿದು ಓಡಾಡ್ತಿದ್ದೀರಿ ಎಂದು ಮೋದಿ ವ್ಯಂಗ್ಯವಾಡಿದರು.
ನಗರದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಭಾಷಣ ಮಾಡಿದ ಮೋದಿ, ಸಿದ್ದರಾಮಯ್ಯನವರೇ, ಸುಳ್ಳು ಹೇಳಿದ್ರೆ ಕಾಗೆ ಕಚ್ಚುತ್ತದೆ (ಜೂಟ್ ಬೋಲೆ ಕವ್ವಾ ಕಾಟೆ) ನಿಮಗೆ ಗೊತ್ತಿಲ್ವೇ? ಎಂದು ಪ್ರಶ್ನಿಸಿದರು.
ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ ಎನ್ನುವ ಮೂಲಕ ಮೋದಿ ಭಾಷಣ ಮುಗಿಸಿದರು.