‘ಮಮತಾ ‘ಶೂರ್ಪನಖಿ’ ಎಂದ ಬಿಜೆಪಿ ಶಾಸಕ’ (ಪ್ರ.ವಾ., ಏ. 26). ಕಾಂಗ್ರೆಸ್ಸನ್ನು ಅವರು ರಾವಣ ಎಂದು ಬಣ್ಣಿಸಿದ್ದಾರೆ!
ಶೂರ್ಪನಖಿ ಎಂದರೆ ಮೊರದಗಲ ಉಗುರಿನವಳು ಎಂದರ್ಥ;
Sharp ನಖಿ ಎಂದೂ ಆಗಬಹುದೆ?
ಆದರೆ ಕುವೆಂಪು ತಮ್ಮ ಮಹಾಕಾವ್ಯದಲ್ಲಿ ಶೂರ್ಪನಖಿಯನ್ನು ‘ಚಂದ್ರ ನಖಿ’ ಮಾಡಿ, ಒಳ್ಳೆಯವಳನ್ನಾಗಿ ಚಿತ್ರಿಸಿರುವುದು ಆ ಶಾಸಕ ಮಹಾಶಯರಿಗೆ ಗೊತ್ತಿರಲಿಕ್ಕಿಲ್ಲ. ಆದ್ದರಿಂದ, ಮಮತಾ ಬ್ಯಾನರ್ಜಿ ‘ಅಲರ್ಜಿ’ ಮಾಡಿಕೊಂಡು ಬೇಸರಿಸಬೇಕಿಲ್ಲ!
ಅಂತೂ ರಾಮಾಯಣ, ಭಾರತ ಇತ್ಯಾದಿಗಳೆಲ್ಲ
ಈಗ ಜೀವಂತ ಹಾಗೂ ಪ್ರಸ್ತುತವಾಗುತ್ತಿವೆ: ಸಂತೋಷ!