ನೆಲಮಂಗಲ: ರಾಜ್ಯದ್ಯಂತ ನಾನು ಪ್ರವಾಸ ಮಾಡಿದ್ದು, ಜೆಡಿಎಸ್ ಈ ಹಿಂದೆ ಗೆದ್ದಿದ್ದ ಸೀಟುಗಳಿಗಿಂತ ಈ ಬಾರಿ 10 ಸೀಟುಗಳನ್ನು ಕಳೆದುಕೊಳ್ಳಲಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದರು.
ಕಾಂಗ್ರೆಸ್ ಅಭ್ಯರ್ಥಿ ಆರ್.ನಾರಾಯಣಸ್ವಾಮಿ ಅವರ ಪರವಾಗಿ ರೋಡ್ ಷೋ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.‘ಕಳೆದ ಎರಡು ಬಾರಿ ಆಕಸ್ಮಿಕವಾಗಿ ಕಾಂಗ್ರೆಸ್ ಸೋತಿದೆ, ನೆಲಮಂಗಲ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆ ಎಂಬುದು ಈ ಬಾರಿ ಸಾಬೀತಾಗಲಿದೆ’ ಎಂದರು.
ನಮ್ಮನ್ನು ಭ್ರಷ್ಟರು ಎನ್ನುವ ಪ್ರಧಾನಿ ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಏಕೆ ತನಿಖೆ ನಡೆಸುತ್ತಿಲ್ಲ. ಬಿಜೆಪಿ 50ಕ್ಕೆ ಮತ್ತು ಜೆಡಿಎಸ್ 20 ಸೀಟುಗಳಿಗೆ ತೃಪ್ತಿಪಟ್ಟುಕೊಳ್ಳಬೇಕಿದೆ ಎಂದರು.