‘₹ 40 ಲಕ್ಷ ಮೊತ್ತದ ಕೈಗಡಿಯಾರವನ್ನು ಸಿದ್ದರಾಮಯ್ಯ ಕಟ್ಟಿದ್ದಾರೆ. ದುಬೈನ ಡಾ. ವರ್ಮಾ ಎಂಬುವವರು ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದ್ದಾರೆ. ವರ್ಮಾ ಸುಮ್ಮನೆ ಆ ವಾಚ್ ಕೊಟ್ಟರೇ? ಯಾಕೆ ಕೊಟ್ಟರು ಎಂಬ ಪ್ರಶ್ನೆಗೆ ಈವರೆಗೂ ಸಿದ್ದರಾಮಯ್ಯ ಉತ್ತರಿಸಿಲ್ಲ. ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಕೆಯಲ್ಲಿ ಈ ವಾಚ್ ಹೊಂದಿರುವ ಬಗ್ಗೆ ಉಲ್ಲೇಖಿಸಿದ್ದೀರಾ’ ಎಂದು ಪ್ರಶ್ನಿಸಿದರು.