ಪ್ರಣಾಳಿಕೆ ಸಿದ್ಧಪಡಿಸಲು ‘ನವ ಕರ್ನಾಟಕ ಜನಪರ ಶಕ್ತಿ’ ಅಭಿಯಾನ ನಡೆಸಲಾಗಿತ್ತು. ಸುಮಾರು 2 ಕೋಟಿ ಜನರನ್ನು ತಲುಪಲಾಗಿತ್ತು. ಅವರು ನೀಡಿರುವ ಸಲಹೆಗಳನ್ನು ಪರಿಗಣಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಪ್ರಣಾಳಿಕೆಯು ಬಿಜೆಪಿ ವೆಬ್ಸೈಟ್ನಲ್ಲಿ ಲಭ್ಯವಿದೆ ಎಂದು ಪಕ್ಷದ ರಾಜ್ಯ ಘಟಕ ತಿಳಿಸಿದೆ. ಚುನಾವಣೆ ಮುಂದೂಡಲಾಗಿರುವ ಜಯನಗರ ಕ್ಷೇತ್ರದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿಲ್ಲ.