ನಂತರ ಶಿಲ್ಪಾ ಮತ್ತು ಬಸವರಾಜು ಒಪ್ಪಿಗೆ ಮೇರೆಗೆ ಪೋಷಕರು ಇಬ್ಬರನ್ನೂ ಬೇರ್ಪಡಿಸಿದರು. ಶಿಲ್ಪಾಳನ್ನು ಸಾಗರೆ ಮನೆಗೆ ಕರೆತಂದ ತಂದೆ ಪ್ರಕಾಶ್, ‘ಮಗಳೇ, ನಿನ್ನ ತಾಳಿಯನ್ನು ಬೇರ್ಪಡಿಸಬೇಕಾಗಿದೆ. ಕಬಿನಿ ನದಿ ಬಳಿ ಹೋಗೋಣ’ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಇತರರೊಂದಿಗೆ ಸೇರಿ ಶಿಲ್ಪಾಳನ್ನು ಕೊಂದು ಸುಟ್ಟು ಹಾಕಿದ ನಂತರ ಕಬಿನಿ ನದಿಗೆ ಬೂದಿ ಬಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.