ಹಾಸನ: ‘ಈ ಬಾರಿ ಜೆಡಿಎಸ್ ಸ್ವಂತ ಬಲದಿಂದ ಅಧಿಕಾರ ಹಿಡಿಯಲಿದೆ’ ಎಂದಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ‘ಹಾಸನ ಜಿಲ್ಲೆಯಲ್ಲಿರುವ 7 ಕ್ಕೆ 7 ವಿಧಾನಸಭೆ ಸ್ಥಾನಗಳನ್ನೂ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ನಾನು, ಕುಮಾರಸ್ವಾಮಿ ಇಡೀ ರಾಜ್ಯವನ್ನು ಸುತ್ತಿದ್ದೇವೆ. ನಾಡಿನ ಜನರು ಕುಮಾರಸ್ವಾಮಿಗೆ ಆಶೀರ್ವಾದ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ’ ಎಂದರು.
‘ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿ ಯಾರ ಬಗ್ಗೆಯೂ ನಾನು ಟೀಕೆ ಮಾಡುವುದಿಲ್ಲ. ಯಾವುದೇ ಪಕ್ಷದ ಪ್ರಣಾಳಿಕೆ ನಮ್ಮ ಪ್ರಣಾಳಿಕೆಗೆ ಹೋಲಿಕೆಯಾಗಲು ಸಾಧ್ಯವೇ ಇಲ್ಲ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.