ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲುಗೆ ಪೆರೋಲ್‌

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ರಾಂಚಿ: ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರಿಗೆ ಪುತ್ರನ ವಿವಾಹ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಮೂರು ದಿನಗಳ ಪೆರೋಲ್‌ ನೀಡಲಾಗಿದೆ ಎಂದು ಜೈಲಿನ ಇನ್ಸ್‌ ಪೆಕ್ಟರ್‌ ಜನರಲ್‌ ಹರ್ಷ ಮಾಂಗ್ಲಾ ತಿಳಿಸಿದರು.

ಲಾಲು ಪ್ರಸಾದ್‌ ಹಿರಿಯ ಮಗ ತೇಜ್‌ ಪ್ರತಾಪ್‌ ಮದುವೆ ಆರ್‌ಜೆಡಿ ಶಾಸಕ ಚಂದ್ರಿಕಾ ರೈ ಮಗಳ ಜತೆ ಮೇ 12ಕ್ಕೆ ನಿಗದಿಯಾಗಿದೆ.

*
ರಾಮ್‌ದೇವ್ ಪುಸ್ತಕಕ್ಕೆ ತಡೆ
ನವದೆಹಲಿ (ಪಿಟಿಐ):
ಯೋಗ ಗುರು ಬಾಬಾ ರಾಮ್‌ದೇವ್ ಜೀವನ ಕುರಿತ ಪುಸ್ತಕ ಪ್ರಕಟಣೆ ಹಾಗೂ ಮಾರಾಟದ ಮೇಲಿನ ನಿಷೇಧವನ್ನು ದೆಹಲಿ ಹೈಕೋರ್ಟ್‌ ಮುಂದುವರಿಸಿ ಮಧ್ಯಂತರ ಆದೇಶ ಹೊರಡಿಸಿದೆ.

ಪುಸ್ತಕ ಪ್ರಕಟಣೆ ಮತ್ತು ಮಾರಾಟದ ಮೇಲೆ ಅಧೀನ ನ್ಯಾಯಾಲಯ ಹೇರಿದ್ದ ನಿಷೇಧವನ್ನು ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶರು ತೆರವುಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಬಾಬಾ ರಾಮ್‌ದೇವ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ಆರ್‌.ಕೆ.ಗೌಬಾ, ನಿಷೇಧವನ್ನು ಮುಂದುವರಿಸಿ ಗುರುವಾರ ಮಧ್ಯಂತರ ಆದೇಶ ಹೊರಡಿಸಿದರು.

*
‘ಬಿಡುಗಡೆ ಪ್ರಯತ್ನ’
ನವದೆಹಲಿ (ಪಿಟಿಐ): ಅಫ್ಗಾನಿಸ್ತಾನದಲ್ಲಿ ಅಪಹರಣಕ್ಕೆ ಒಳಗಾಗಿರುವ ಏಳು ಮಂದಿ ಭಾರತೀಯ ಎಂಜಿನಿಯರ್‌ಗಳ ಬಿಡುಗಡೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದ್ದಾರೆ.

ಆದರೆ, ನಿರ್ದಿಷ್ಟವಾಗಿ ಯಾವ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂಬ ಬಗ್ಗೆ ಮಾಹಿತಿ ನೀಡಲು ಅವರು ನಿರಾಕರಿಸಿದರು. ‘ಇದು ಸೂಕ್ಷ್ಮ ವಿಷಯವಾಗಿರುವ ಕಾರಣ ಹೆಚ್ಚಿನ ವಿವರ ನೀಡುವುದಿಲ್ಲ’ ಎಂದರು.

*
ತನಿಖೆಗೆ ಆಗ್ರಹ
ಕಣ್ಣೂರು (ಪಿಟಿಐ):
ಮಾಹೆಗೆ ಸಮೀಪದ ಪಲ್ಲೂರ್‌ನಲ್ಲಿ ನಡೆದ ಪಕ್ಷದ ಕಾರ್ಯಕರ್ತನ ಕೊಲೆ ಪ್ರಕರಣ ಸಂಬಂಧ ಎಸ್‌ಐಟಿ ರಚಿಸಿ ತನಿಖೆ ನಡೆಸುವಂತೆ ಪುದುಚೇರಿ ಸರ್ಕಾರವನ್ನು ಸಿಪಿಎಂ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT