ಶಿವಮೊಗ್ಗ: ಬುದ್ಧಿವಾದ ಹೇಳಿದ್ದಕ್ಕೆ ಮೊಮ್ಮಗನೇ ಅಜ್ಜನನ್ನು ಸಾಗರ ತಾಲ್ಲೂಕಿನ ಕೆಳದಿ ಗ್ರಾಮದಲ್ಲಿ ಬುಧವಾರ ರಾತ್ರಿ ಕೊಲೆ ಮಾಡಿದ್ದಾನೆ.
ರಾಮರಾವ್ (72) ಕೊಲೆಯಾದ ವ್ಯಕ್ತಿ. ಮೊಮ್ಮಗ ಸಾತ್ವಿಕ್ ಮದ್ಯ ವ್ಯಸನಿಯಾಗಿದ್ದ. ಅದರಿಂದ ಹೊರಬರುವಂತೆ ಅಜ್ಜ ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡ ಸಾತ್ವಿಕ್ ಅಜ್ಜನ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ತೀವ್ರವಾಗಿ ಗಾಯಗೊಂಡ ಅವರು ಸಾವನ್ನಪ್ಪಿದ್ದಾರೆ.