ನಗರದಲ್ಲಿ ನಡೆದ ದಲಿತ ಮತದಾರರ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಸದಾಶಿವ ಆಯೋಗ ವರದಿ ಜಾರಿ ಮಾಡುವ ಬಗ್ಗೆ ಭರವಸೆ ನೀಡುವ, ದಲಿತರ ಶವಸಂಸ್ಕಾರಕ್ಕೆ ಜಮೀನು ನೀಡುವ, ಎಲ್ಲಾ ದೇವಾಲಯಗಳಿಗೆ ಹಾಗೂ ಸಾರ್ವಜನಿಕರ ಸ್ಥಳಗಳಿಗೆ ಮುಕ್ತ ಪ್ರವೇಶ ಕಲ್ಪಿಸುವ ಮನಸ್ಸುಳ್ಳ ವ್ಯಕ್ತಿಗೆ ಮತ ನೀಡಿ ಎಂದು ದಲಿತ ಮತದಾರರಲ್ಲಿ ಮನವಿ ಮಾಡಿದ್ದಾರೆ.