ಅದರಲ್ಲೂ ಅರಸೀಕೆರೆ, ಹಾಸನ, ತಿಪಟೂರು, ಹೊಸದುರ್ಗ, ಶಿವಮೊಗ್ಗದ ಕಡೆಗೆ ತೆರಳುವ ಪ್ರಯಾಣಿಕರು ಹೆಚ್ಚು ಪರದಾಡಿದರು. ಅಲ್ಲದೇ ದಾವಣಗೆರೆ, ಹುಬ್ಬಳ್ಳಿ ,ಬಳ್ಳಾರಿಗೆ ಹೋಗಬೇಕಾದ ಪ್ರಯಾಣಿಕರು ದಿಕ್ಕು ತೋಚದೇ ನಿಂತಿದ್ದರು. ಸಂಜೆಯವರೆಗೂ ಕಾಯುತ್ತೇವೆ. ಇಲ್ಲದೇ ಇದ್ದರೆ ಹೆದ್ದಾರಿಗೆ ಹೋಗಿ ಸಿಕ್ಕ ಬಸ್ ಹತ್ತಿಕೊಂಡು ಹೋಗುತ್ತೇವೆ ಎಂದು ಬಳ್ಳಾರಿಯ ವೆಂಕಟೇಶ್ ಹೇಳಿದರು.