ಭಾಲ್ಕಿ ತಾಲ್ಲೂಕಿನ ಕೆರೂರು ಗ್ರಾಮದಲ್ಲಿ ಪಾಲಿಟೆಕ್ನಿಕ್ ವಿದ್ಯಾರ್ಥಿನಿ ರೇಣುಕಾ ಏಕಲೂರೆ ಮತದಾನದ ನಂತರ ಮತಗಟ್ಟೆಯಿಂದ ಹೊರಬಂದು ಬೆರಳು ತೋರಿಸಿ ವಿಜಯ ಸಂಕೇತ ಪ್ರದರ್ಶಿಸಿದರು. ‘ಗೋಪ್ಯ ಮತದಾನ ಮಾಡುವ ಅವಕಾಶ ಸಿಕ್ಕಿದೆ. ಮತ ಯಾರಿಗೆ ಹಾಕಿದ್ದೇನೆ ಎಂದು ಹೇಳಲಾರೆ. ಅಭಿವೃದ್ಧಿಯ ಪರವಾಗಿ ನನ್ನ ಹಕ್ಕು ಚಲಾಯಿಸಿದ್ದೇನೆ’ ಎಂದು ಮುಗುಳ್ನಗೆ ಬೀರಿದರು.