‘ಉದ್ಯೋಗ ಹುಡುಕಿಕೊಂಡು ಕಲಬುರ್ಗಿಯಿಂದ ಸಾವಿರಾರು ಸಂಖ್ಯೆಯಲ್ಲಿ ಜನ ನಗರಕ್ಕೆ ಬಂದಿದ್ದಾರೆ. ಅವರಲ್ಲಿ ಕೆಲವರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ‘ಚುನಾವಣೆ ಇರುವುದರಿಂದ ಮೇ 10ರಂದು ರಾತ್ರಿ ನಿಮ್ಮನ್ನೆಲ್ಲ ಉಚಿತವಾಗಿ ಬಸ್ನಲ್ಲಿ ಊರಿಗೆ ಕರೆದುಕೊಂಡು ಹೋಗುತ್ತೇವೆ. ಮೇ 13ರಂದು ಬೆಂಗಳೂರಿಗೆ ವಾಪಸ್ ಕರೆದುಕೊಂಡು ಬರುತ್ತೇವೆ. ನಾವು ಹೇಳಿದ ಅಭ್ಯರ್ಥಿಗಳು ಮತ ಹಾಕಬೇಕು’ ಎಂದು ಹೇಳಿದ್ದ’ ಎಂದು ದಯಾನಂದ್ ದೂರಿನಲ್ಲಿ ತಿಳಿಸಿದ್ದಾರೆ.