ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಚಾಮರಸ ತನ್ನ ಕೃತಿಯಲ್ಲಿ ಎಲ್ಲಿಯೂ ತನ್ನ ಹೆಸರನ್ನು ಹೇಳಿಕೊಂಡಿಲ್ಲ. ತಮ್ಮ ಹೆಸರನ್ನು ಘೋಷಿಸಿಕೊಂಡು ಕಾವ್ಯವನ್ನು ಬರೆದವರು ಒಂದು ಬಗೆಯಾದರೆ, ತನ್ನ ಹೆಸರನ್ನು ಎಲ್ಲಿಯೂ ಹೇಳಿಕೊಳ್ಳದ ಕವಿಗಳು ಇದ್ದಾರೆ. ಎರಡನೇ ಗುಂಪಿಗೆ ಚಾಮರಸ ಸೇರುತ್ತಾನೆ. ಪ್ರಭುವಿನ ಲೀಲೆಯನ್ನು ಹೇಳುತ್ತ ಮೇರುಕವಿಯಾಗಿ ನಿಲ್ಲುತ್ತಾನೆ’ ಎಂದು ಅಭಿಪ್ರಾಯಪಟ್ಟರು.