ನಗರದ ಹರಟೆಕಟ್ಟೆಗಳಲ್ಲಿ ಚಹದಂಗಡಿಗಳಲ್ಲಿ ಸೋಲು, ಗೆಲುವಿನ ಲೆಕ್ಕಾಚಾರ ಜೋರಾಗಿಯೇ ಸಾಗಿದೆ. ಕೆಲವೆಡೆ ಬೆಟ್ಟಿಂಗ್ ಕೂಡಾ ನಡೆದಿದೆ. ಕಾಂಗ್ರೆಸ್ - ಬಿಜೆಪಿ ನಡುವಿನ ನೇರ ಹಣಾಹಣಿಯಲ್ಲಿ ಗೆಲ್ಲುವವರು ಯಾರು ಎಂಬುದೇ ಚರ್ಚೆಯ ಪ್ರಧಾನ ವಸ್ತು. ಸುಮಾರು 20 ದಿನಗಳಿಂದ ವಿವಿಧ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದ ಧ್ವನಿವರ್ಧಕಗಳು ಬಂದ್ ಆಗಿವೆ. ಗೌಜು, ಗದ್ದಲಗಳಿಂದ ಮುಕ್ತವಾಗಿ ಶಾಂತತೆ ನೆಲೆಸಿದೆ. ಬಾಕಿ ಉಳಿದಿದ್ದ ರಸ್ತೆ ಕಾಮಗಾರಿ ವೇಗ ಪಡೆದಿದೆ. ನೀತಿ ಸಂಹಿತೆಯ ಒತ್ತಡದಿಂದ ಮದ್ಯ ಮಾರಾಟಗಾರರು ಕೊಂಚ ನಿರಾಳವಾಗಿದ್ದಾರೆ. ಬಾರ್ಗಳಲ್ಲಿ ಗ್ರಾಹಕರ ಪ್ರಮಾಣ ಹೆಚ್ಚಿದೆ.