ಬಳ್ಳಾರಿ: ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳಿಗೆ ಈಗ ದಣಿವು ಆರಿಸಿಕೊಳ್ಳುವ ಸಮಯ.ಮತದಾನ ಮುಗಿಯುವವರೆಗೂ ಬಿಸಿಲು, ನೆರಳೆನ್ನದೆ ಸಂಚರಿಸಿದ ಬಹುತೇಕರು ಭಾನುವಾರ ಮನೆಗಳಲ್ಲೇ ಉಳಿದು ಕುಟುಂಬದ ಸದಸ್ಯರೊಂದಿಗೇ ಇದ್ದು ವಿಶ್ರಾಂತಿ ಪಡೆದರು. ದಿನಪತ್ರಿಕೆಗಳಲ್ಲಿ ಮತದಾನದ ವರದಿಗಳನ್ನು ಓದಿದರು. ದೃಶ್ಯ ವಾಹಿನಿಗಳ ಮತದಾನದ ನಂತರದ ವಿಶ್ಲೇಷಣೆಗಳನ್ನು ಕುತೂಹಲದಿಂದ ನೋಡಿದರು. ಕೆಲವರು ಮನೆದೇವರ ಗುಡಿಗಳಿಗೆ ಭೇಟಿ ಕೊಟ್ಟರು. ‘ಇನ್ನು ಇದರ ಸಹವಾಸ ಸಾಕು’ ಎಂದು ಕೆಲವರು ಕ್ಷೇತ್ರ ಬಿಟ್ಟು ತೆರಳಿದರು! –ಮತದಾನದ ಮಾರನೇ ದಿನ ಅಭ್ಯರ್ಥಿಗಳ ದಿನಚರಿ ಹೀಗಿತ್ತು,