ವಯಸ್ಸಾದವರು, ಅಂಗವಿಕಲರು, ದೂರದ ಊರುಗಳಿಂದ ಬಂದವರು, ಮತದಾನದ ದಿನವೇ ಮದುವೆಯಾದವರು... ಹೀಗೆ ಎಲ್ಲರೂ ಮತ ಚಲಾಯಿಸಿದ್ದನ್ನು ನೋಡಿದ್ದೇವೆ. ಹೀಗಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿರುವ ಈ ಇಬ್ಬರು ಹೀಗೆ ಬೇಜವಾಬ್ದಾರಿತನ ತೋರಬಹುದೇ? ಮತದಾನ ಮಾಡದೆಯೇ ಯಾವ ನೈತಿಕತೆಯಿಂದ ಇವರು ಮುಂದಿನ ಸರ್ಕಾರವನ್ನು ಪ್ರಶ್ನಿಸುತ್ತಾರೆ? ನಾಲ್ಕು ಜನರಿಗೆ ಮಾದರಿಯಾಗಬೇಕಾದವರೇ ಹೀಗೆ ಮಾಡುವುದು ಎಷ್ಟು ಸರಿ?