ಇವರಲ್ಲಿ ಯಾರಿಗೆ ವೋಟು ಹಾಕಿದರೂ ‘ಅವರ ಭ್ರಷ್ಟಾಚಾರಕ್ಕೆ ನಾನೂ ಸಹಮತ ಒತ್ತಿದಂತಾಗುತ್ತದೆ’ ಎಂಬ ಪಾಪಪ್ರಜ್ಞೆ ಕಾಡುತ್ತದೆ. ಚುನಾವಣೆಗೂ ಮುನ್ನ ಹಣ, ಕುಕ್ಕರ್, ಮಿಕ್ಸಿ ಹಂಚಿಕೆಗಳೇನೂ ತೆರೆಮರೆಯಲ್ಲಿ ನಡೆದಿರಲಿಲ್ಲ. ಹೈಕಮಾಂಡ್ಗೆ ದುಡ್ಡು ಕೊಟ್ಟು ಟಿಕೆಟ್ ಪಡೆಯುವುದು, ಹಣ ನೀಡಿ ಎದುರು ಪಕ್ಷದ ಅಭ್ಯರ್ಥಿಯನ್ನು ಖರೀದಿಸುವುದು, ಚುನಾವಣೆಗೆ ಮೊದಲೇ ಫಿಕ್ಸಿಂಗ್, ಜಾತಿ- ಉಪಜಾತಿ- ಒಳಜಾತಿ ಲೆಕ್ಕಾಚಾರ... ಹೀಗೆ ನೈತಿಕತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುವುದನ್ನು ನೋಡಿದಾಗ ಬೇಸರವೆನಿಸುತ್ತದೆ.