ಇದೇನೂ ಹೊಸತಲ್ಲ. ಆಡಳಿತ ಸಮರ್ಪಕವಾಗಿಲ್ಲದೆ ಇದ್ದಾಗ ಮತದಾರರು ವಿವೇಚನೆಯ ನಿರ್ಧಾರ ಕೈಗೊಂಡು, ಅಧಿಕಾರ ನಡೆಸಿದವರನ್ನು ಕುರ್ಚಿಯಿಂದ ಕೆಳಗಿಳಿಸಿದ ಹಲವು ಉದಾಹರಣೆಗಳಿವೆ. ಈ ಚುನಾವಣೆಯಲ್ಲಿ ಮತದಾರರು ಮತ್ತೆ ಅದೇ ಮನೋಭಾವ ವ್ಯಕ್ತಪಡಿಸಿದ್ದಾರೆ. ಹೇಗೆ ಆಡಳಿತ ನಡೆಸಿದರೂ ಜನ ಕಣ್ಣುಮುಚ್ಚಿ ಒಪ್ಪಿಕೊಳ್ಳುತ್ತಾರೆ ಎಂಬ ರಾಜಕಾರಣಿಗಳ ಮನೋಧರ್ಮಕ್ಕೆ ಬಲುದೊಡ್ಡ ಏಟು ಬಿದ್ದಿದೆ.