ಬಳ್ಳಾರಿ: ಮಕ್ಕಳ ಕಳ್ಳ ಎಂದು ವ್ಯಕ್ತಿಯೊಬ್ಬನನ್ನು ನಗರದ ದೇವಿನಗರದ ಕುಟ್ಟಿ ಹೋಟೆಲ್ ವೃತ್ತದಲ್ಲಿ ಬುಧವಾರ ಸ್ಥಳೀಯರು ಮರಕ್ಕೆ ಕಟ್ಡಿಹಾಕಿದ್ದಾರೆ. ಬಳಿಕ ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮರಕ್ಕೆ ಕಟ್ಟಿಹಾಕಿದ ವೇಳೆ ವೃತ್ತದಲ್ಲಿ ಜನಸ್ತೋಮವೇ ಸೇರಿತ್ತು.
ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರ ವಾಹನ ಮುಂದೆ ಸಾಗುತ್ತಿದ್ದಂತೆ ಜನ ಸ್ಪಲ್ಪ ದೂರು ವಾಹನವನ್ನು ಹಿಂಬಾಲಿಸಿದರು. ಪೊಲೀಸರು ವ್ಯಕ್ತಿಯ ವಿಚಾರಣೆ ನಡೆಸುತ್ತಿದ್ದಾರೆ.