ವಿಜಯೋತ್ಸವ: ತೆರೆದ ವಾಹನದಲ್ಲಿ ಶಿವಲಿಂಗೇಗೌಡರರನ್ನು ಪಿ.ಪಿ.ವೃತ್ತದವರೆಗೂ ಕೆರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಿವಲಿಂಗೇಗೌಡರು, ‘ಕ್ಷೇತ್ರದ ಅಭಿವೃದ್ದಿ ಮೆಚ್ಚಿ ಜನತೆ ಮತ್ತೆ ಆಶೀರ್ವದಿಸಿದ್ದಾರೆ. ಲಿಂಗಾಯತ, ಹಿಂದುಳಿದ, ದಲಿತ, ಅಲ್ಪಸಂಖ್ಯಾತರು ಹೆಚ್ಚಿನ ಪ್ರಮಾಣದಲ್ಲಿ ಬೆಂಬಲಿಸಿದ್ದಾರೆ’ ಎಂದರು. ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ, ಉಪಾಧ್ಯಕ್ಷ ಪಾರ್ಥಸಾರಥಿ, ತಾ.ಪಂ ಅಧ್ಯಕ್ಷೆ ರೂಪಾ ಗುರುಮೂರ್ತಿ ಉಪಾಧ್ಯಕ್ಷ ಹಾಗೂ ವಿವಿಧ ಮುಖಂಡರು ಇದ್ದರು.