ಕುಮಾರಸ್ವಾಮಿಯವರು ಒಮ್ಮೆ ವಾಟಾಳ್ ನಾಗರಾಜ್ ಅವರ ರಾಜಕೀಯ ಜೀವನದತ್ತ ದೃಷ್ಟಿ ಹಾಯಿಸಬೇಕು. ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಭಾರಿ ಅಂತರದಿಂದ ಸೋತಿದ್ದಾರೆ ಎಂಬ ಸುದ್ದಿ ತಿಳಿದು ಬೇಸರವಾಯಿತು. ಕನ್ನಡ ಪರ ಚಳವಳಿಯ ಮೂಲಕ ನಾಯಕರಾಗಿ ರೂಪುಗೊಂಡ ವಾಟಾಳ್, ಕರ್ನಾಟಕದ ಚುನಾವಣಾ ರಾಜಕೀಯವನ್ನು ಹತ್ತಿರದಿಂದ ಕಂಡವರು. ಮನಸ್ಸು ಮಾಡಿದ್ದರೆ ಯಾವುದಾದರೂ ಪಕ್ಷ ಸೇರಿ, ಮಂತ್ರಿಯೂ ಆಗಬಹುದಿತ್ತು. ಆದರೆ ತತ್ವ– ಸಿದ್ಧಾಂತವನ್ನು ಬಿಟ್ಟುಕೊಡದೆ, ತಮ್ಮ ಹೋರಾಟಕ್ಕೆ ಬದ್ಧರಾಗಿ ಸ್ವಂತ ಪಕ್ಷ ಕಟ್ಟಿ ಹೋರಾಟ ನಡೆಸುತ್ತಿದ್ದಾರೆ. ಜೆಡಿಎಸ್ನವರೂ ಹೊಂದಾಣಿಕೆಯ ರಾಜಕಾರಣವನ್ನು ಬಿಟ್ಟು, ವಾಟಾಳ್ ಅವರಂತೆ ಹೋರಾಟ ಮಾಡಿ, ರಾಜ್ಯದ ಜನರ ಮನಸ್ಸನ್ನು ಗೆದ್ದು, ಸ್ವಂತ ಶಕ್ತಿಯಿಂದಲೇ ಸರ್ಕಾರ ರಚಿಸಬಹುದಿತ್ತಲ್ಲವೇ?