ಗುರುವಾರ ನಡೆದ ಮತ ಎಣಿಕೆ ವೇಳೆ ಕೆಲವು ಕಡೆ ಘರ್ಷಣೆ ನಡೆದಿದೆ. ಟಿಎಂಸಿ ಕಾರ್ಯಕರ್ತರು ಪ್ರತಿಪಕ್ಷದ ಅಭ್ಯರ್ಥಿಗಳು ಹಾಗೂ ಮತಗಟ್ಟೆ ಏಜೆಂಟರ ಮೇಲೆ ದಾಳಿ ನಡೆಸಿದ ವರದಿಯಾಗಿದೆ. ಉತ್ತರ ದಿನಾಜ್ಪುರದಲ್ಲಿ ಇಬ್ಬರ ಮೇಲೆ ಗುಂಡು ಹಾರಿಸಲಾಗಿದೆ. ವಾಹನಗಳನ್ನು ಅಪಹರಿಸಲಾಗಿದೆ. ಇದನ್ನು ಖಂಡಿಸಿ, ಬಿಜೆಪಿ, ಕಾಂಗ್ರೆಸ್ ಹಾಗೂ ಸಿಪಿಎಂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.