ಸೆಲ್ಕೊ ಸೂರ್ಯಮಿತ್ರ ಪ್ರಶಸ್ತಿಗೆ ಉಡುಪ ವೀಣಾ ಆಯ್ಕೆ

ಬೆಂಗಳೂರು: ಸೆಲ್ಕೊ ಸೂರ್ಯಮಿತ್ರ ರಾಷ್ಟ್ರೀಯ ಪ್ರಶಸ್ತಿಗೆ ಉಡುಪಿಯ ಕೆ.ಎಂ. ಉಡುಪ ಹಾಗೂ ಪುಣೆಯ ಡಾ.ವೀಣಾ ಜೋಷಿ ಆಯ್ಕೆಯಾಗಿದ್ದಾರೆ.
ವಿಕೇಂದ್ರೀಕೃತ ಸೌರ ಉಪಕರಣಗಳಿಗೆ ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯ ಒದಗಿಸುವ ನೀತಿಗೆ ಪ್ರವರ್ತಕರಾಗಿರುವ ಉಡುಪ ಅವರನ್ನು ಹಾಗೂ ಸುಸ್ಥಿರ ಇಂಧನ ಕ್ಷೇತ್ರದಲ್ಲಿ ನೀಡುವ ಕೊಡುಗೆಗಾಗಿ ವೀಣಾ ಅವರನ್ನು ಪ್ರಶಸ್ತಿಗಾಗಿ ಆಯ್ಕೆಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮೇ 19ರಂದು ಚಿತ್ರದುರ್ಗದ ತ.ರಾ.ಸು ರಂಗಮಂದಿರದಲ್ಲಿ ನಡೆಯುವ ಸೆಲ್ಕೊ ವಾರ್ಷಿಕ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.