ಆತಂಕ ಹೆಚ್ಚಳ: ‘ಬಾಗಲಕೋಟೆ, ಯಾದಗಿರಿ, ಕೊಪ್ಪಳ, ಬಳ್ಳಾರಿ ಸೇರಿದಂತೆ ಈ ಭಾಗದ ಜಿಲ್ಲೆಗಳಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ. ಅವರು, ಮಕ್ಕಳನ್ನು ಅಪಹರಿಸಿ ಕೊಂದು ದೇಹದ ಅಂಗಾಂಗಗಳನ್ನು ಕಿತ್ತೊಯ್ಯುತ್ತಿದ್ದಾರೆ’ ಎಂಬ ಸಂದೇಶಗಳು ಕಳೆದೊಂದು ವಾರದಿಂದ ಫೇಸ್ಬುಕ್ ಹಾಗೂ ವಾಟ್ಸ್ ಆ್ಯಪ್ನಲ್ಲಿ ಹರಿದಾಡುತ್ತಿವೆ. ಇದು ವದಂತಿಯ ರೂಪ ತಾಳಿ, ಹಲವೆಡೆ ಗ್ರಾಮಸ್ಥರು ರಾತ್ರಿ– ಹಗಲು ಪಾಳಿಯಲ್ಲಿ ಕಾವಲು ಕಾಯುತ್ತಿದ್ದಾರೆ. ಮಕ್ಕಳನ್ನು ಮನೆಯಿಂದ ಹೊರಗೆ ಬಿಡುತ್ತಿಲ್ಲ. ಗ್ರಾಮಗಳಿಗೆ ಅಪರಿಚಿತರು ಬಂದರೆ ಅನುಮಾನದಿಂದ ನೋಡಲಾಗುತ್ತಿದೆ. ಹಿಡಿದು ವಿಚಾರಿಸುವುದು, ಬಾಗಿಲು ಹಾಕಿಕೊಳ್ಳುವುದು ಕಂಡುಬಂದಿದೆ.
*
ವದಂತಿ ನಂಬಬೇಡಿ: ಎಸ್ಪಿ
‘ಕೂಡಲಸಂಗಮದಲ್ಲಿ ಸಿಕ್ಕಿರುವ ಬಾಲಕನ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ. ದೇಹದ ಅಂಗಾಂಗಗಳನ್ನು ಪ್ರಾಣಿಗಳು ತಿಂದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ತನಿಖೆಯಿಂದ ಸತ್ಯಾಂಶ ಹೊರಬರಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಹೇಳಿದರು.