‘ಕುಂಬಾರಹಳ್ಳಿ ಕೆರೆಯ ಸುತ್ತಲೂ ಕಟ್ಟಡ ತ್ಯಾಜ್ಯ, ಹಸಿ ತ್ಯಾಜ್ಯ ಸುರಿಯಲಾಗಿದ್ದು, ಸಂಪೂರ್ಣ ಕಲುಷಿತಗೊಂಡಿದೆ. ಅದನ್ನು ಸ್ವಚ್ಚಗೊಳಿಸುವ ಜೊತೆಗೆ ಹೂಳು ತೆಗೆದು ನೀರು ನಿಲ್ಲುವಂತೆ ಮಾಡಲಾಗುವುದು. ಕೆರೆಯ ಬದಿಯಲ್ಲಿ ಇರುವ ಹೊಂಗೆ ಮರಗಳನ್ನು ಪೋಷಿಸಲು ಅಗತ್ಯ ಸೌಲಭ್ಯ ರೂಪಿಸಲಾಗುವುದು. ಮಾತ್ರವಲ್ಲ ಕೆರೆಯ ಸುತ್ತಲೂ ಇನ್ನೂ ಹೆಚ್ಚಿನ ಮರಗಳನ್ನು ಬೆಳೆಸಲಾಗುವುದು’ ಎಂದು ಯೋಜನೆಯ ನಿರ್ದೇಶಕ ವಸಂತ್ ಸಾಲಿಯಾನ ತಿಳಿಸಿದರು.