ಖರೀದಿ’ ಭೀತಿಯಿಂದ ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿದ್ದ ಶಾಸಕರನ್ನು ಗುರುವಾರ ರಾತ್ರಿ ಹೈದರಾಬಾದ್ನ ತಾಜ್ ಕೃಷ್ಣಾ ಹೋಟೆಲ್ಗೆ ಕಾಂಗ್ರೆಸ್ ಸ್ಥಳಾಂತರಿಸಿತ್ತು. ಶಾಂಗ್ರಿಲಾ ಹೋಟೆಲ್ನಲ್ಲಿದ್ದ ತನ್ನ ಶಾಸಕರ ವಾಸ್ತವ್ಯವನ್ನೂ ಜೆಡಿಎಸ್ ಹೈದರಾಬಾದ್ಗೆ ಬದಲಿಸಿತ್ತು. ಇದೀಗ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ.