ದೇಶದ ಪ್ರಮುಖ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಸಾಮಾಜಿಕ ಹೋರಾಟಗಾರರು, ಸ್ವಯಂ ಸೇವಾ ಸಂಸ್ಥೆಗಳು ಇವಿಎಂ ಮತಯಂತ್ರ ನಿಷೇಧಿಸಲು ಆಗ್ರಹಿಸುತ್ತಿದ್ದಾರೆ. ಮೇ 12ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ ಮೊದಲಾದ ಕಡೆ ಇವಿಎಂ ದೋಷಗಳ ಬಗ್ಗೆ ದೂರು ಬಂದಿರುವುದರಿಂಂದ ನಿಷೇಧಿಸುವುದೇ ಸೂಕ್ತ. ಇವಿಎಂ ದುರ್ಬಳಕೆ ಬಗ್ಗೆ ಬಂದ ದೂರುಗಳ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಚುನಾವಣಾ ಆಯೋಗಕ್ಕೆ ಕೇಂದ್ರ ಸರ್ಕಾರ ನಿರ್ದೇಶಿಸಬೇಕು ಎಂದು ಒತ್ತಾಯಿಸಿದರು.