ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ‘ನಾನು ಯಡಿಯೂರಪ್ಪ ಸಚಿವ ಸಂಪುಟದ ಸದಸ್ಯ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಅವರು ನನಗೆ ಮಂತ್ರಿ ಸ್ಥಾನ ಖಚಿತಪಡಿಸಿದ್ದಾರೆ’ ಎಂದು ಹೇಳಿಕೊಂಡಿದ್ದರು. ರೈತ ಮುಖಂಡರೊಬ್ಬರು, ಭದ್ರಾ ‘ಕಾಡಾ’ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ತಾವು ಆಕಾಂಕ್ಷಿ
ಯಾಗಿದ್ದು, ‘ಯಡಿಯೂರಪ್ಪ ನನ್ನನ್ನೇ ನೇಮಕ ಮಾಡಬೇಕು’ ಎಂದು ಒತ್ತಾಯವನ್ನೂ ಮಾಡಿದ್ದರು.