‘ಸ್ಪರ್ಧೆಗೆ ಬರುವಂತೆ ಮೇ 14 ಮತ್ತು 15ರಂದು ನಮ್ಮ ಮೊಬೈಲ್ಗಳಿಗೆ ವಾಹಿನಿಯ ಸಿಬ್ಬಂದಿ ಕರೆ ಮಾಡಿ, ರಸಪ್ರಶ್ನೆಗಳನ್ನು ಕೇಳಿ, ಹೆಸರನ್ನು ನೋಂದಾಯಿಸಿಕೊಂಡಿದ್ದರು. ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಇಲ್ಲಿಗೆ ಬಂದಿದ್ದೇವೆ. ಆದರೆ, ಇಲ್ಲಿಗೆ ಬಂದ ಬಳಿಕ ಅವಕಾಶ ನಿರಾಕರಿಸುತ್ತಿದ್ದಾರೆ’ ಎಂದು ರಾಯಚೂರಿನಿಂದ ಬಂದಿದ್ದ ಸಂಗನಬಸವ, ಬೆಳಗಾವಿ ಜಿಲ್ಲೆ ಸಂಕೇಶ್ವರದಿಂದ ಬಂದಿದ್ದ ವೀರೇಶ್ವರಿ ಮಾಳಗಿ ದೂರಿದರು.