ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎನ್ಬಿಯು ಸಿಬಿಐಗೆ ಜನವರಿ 30ರಂದು ದೂರು ನೀಡಿತ್ತು. ಆದರೆ ಅದಕ್ಕೂ ಮೊದಲೇ ನೀರವ್ ಮತ್ತು ಮೆಹುಲ್ ಹಾಗೂ ಇಬ್ಬರೂ ದೇಶಬಿಟ್ಟು ಪರಾರಿಯಾಗಿದ್ದರು. ಆರೋಪಿಗಳು ಎಲ್ಲಿದ್ದಾರೆ ಎಂಬುದು ತಿಳಿಯದಿದ್ದ ಕಾರಣ ಸಿಬಿಐ ಆಗಲೇ ಇಂಟರ್ಪೋಲ್ನ ಮೂಲಕ ನೋಟಿಸ್ ಜಾರಿ ಮಾಡಿತ್ತು. ಅವರನ್ನು ಪತ್ತೆ ಮಾಡಲು ಮತ್ತು ಅವರ ಇರುವಿಕೆ ಬಗ್ಗೆ ಮಾಹಿತಿ ನೀಡಲು ಇಂಟರ್ಪೋಲ್ ಪ್ರಯತ್ನಿಸಿತ್ತಾದರೂ, ಅದು ಫಲಪ್ರದವಾಗಿರಲಿಲ್ಲ.