ನೀರಿಲ್ಲದೆ ಸೊರಗಿದ್ದ ಗಿಡಮರಗಳು ಮರುಜೀವ ಪಡೆದುಕೊಂಡಿವೆ. ರಸ್ತೆ ವಿಸ್ತರಣೆ ಮತ್ತು ವಿವಿಧ ನಿರ್ಮಾಣ ಕಾಮಗಾರಿಗಳಿಂದಾಗಿ ಎದ್ದಿದ್ದ ದೂಳಿನಿಂದ ಮರಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದ್ದವು. ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ ಮತ್ತು ಮೃಗಾಲಯದ ಪರಿಸರ ಹಾಗೂ ನಗರದ ಉದ್ಯಾನಗಳಲ್ಲಿ ಹಸಿರು ಇನ್ನಷ್ಟು ಹೆಚ್ಚಿದೆ.