ಸಿರಿಗೆರೆ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಎಸ್.ಬಿ.ರಂಗನಾಥ್ ಮಾತನಾಡಿ, ‘ಶಿಕ್ಷಣದಿಂದ ಶಾಂತಿ, ಸಮೃದ್ಧಿ ಹೆಚ್ಚಬೇಕು. ಇಂದು ಎಲ್ಲೆಡೆ ಅಶಾಂತಿ, ಕ್ಷೋಭೆ, ಹಿಂಸೆ ಕಾಣುತ್ತಿವೆ. ಹಳ್ಳಿಗಳು ಪ್ರತಿರೋಧ ಮನೋಭಾವದಿಂದ ಕಳಾಹೀನವಾಗಿವೆ. ಸುಶಿಕ್ಷಿತರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂದಿನ ಯುವ ಪೀಳಿಗೆ ಸ್ವಾರ್ಥ, ವಿದೇಶದ ಹಪಾಹಪಿ, ಹಿರಿಯರನ್ನು ವೃದ್ಧಾಶ್ರಮ ಸೇರಿಸುವ ಸ್ವಾರ್ಥ ಮೈಗೂಡಿಸಿಕೊಂಡಿದ್ದಾರೆ’ ಎಂದು ಹೇಳಿದರು.