ಕರ್ನೂಲ್ ಜಿಲ್ಲೆಯ ಕಡೂರ ಗ್ರಾಮದವರು ಈ ಭಾಗದಲ್ಲಿ ಬೀಡು ಬಿಟ್ಟಿದ್ದು, ಕೂದಲು ಸಂಗ್ರಹಿಸುವ ಹಾಗೂ ಸ್ಟೀಲ್ ಸಾಮಗ್ರಿ ಮಾರಾಟ ಮಾಡುವ ನೆಪದಲ್ಲಿ ಬಂದು ಮಕ್ಕಳನ್ನು ಅಪಹರಣ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ನಾಲತವಾಡ, ಬಿಜ್ಜೂರ, ಖಾನಿಕೇರಿ, ಸುಲ್ತಾನಪುರ, ಅಯ್ಯನಗುಡಿ, ಇಂಗಳಗಿ ಟಕ್ಕಳಕಿಯಲ್ಲಿ ತೆಲುಗು ಭಾಷಿಕರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸಿತ್ತು.