ಪಟ್ಟಣದ ಬಸವೇಶ್ವರ ನಗರದ ದುರುಗಪ್ಪ ರಾಮೇನಹಳ್ಳಿ ಅವರ ಮುನೆಯ ಮುಂದೆ, ಕೊಪ್ಪಳ ರಸ್ತೆಯ ಭೂಮರಡ್ಡಿ ಅವರ ಮನೆಯ ಸಮೀಪ ವಿದ್ಯುತ್ ಕಂಬ ನೆಲಕ್ಕುರುಳಿವೆ. ಅಶೋಕ ಹಂದ್ರಾಳ ಅವರ ಮನೆಯ ಮೇಲೆ ಬೇವಿನ ಗಿಡ ಬಿದ್ದಿದೆ. ಆದರೆ, ಗಾಳಿ, ಮಳೆ ಪ್ರಾರಂಭವಾಗುತ್ತಿದ್ದಂತೆ, ಮನೆಯ ಜನರೆಲ್ಲ ಮನೆಯ ಒಂದು ಬದಿಯಲ್ಲಿ ನಿಂತು, ಎಚ್ಚರಿಕೆ ವಹಿಸಿದ್ದರಿಂದ ಅನಾಹುತ ತಪ್ಪಿದೆ. ಕೋಟೆ ಭಾಗ, ಕಡ್ಲಿಪೇಟೆ, ಡಾ.ಬಿ.ಆರ್.ಅಂಬೇಡ್ಕರ್ ನಗರ, ಬ್ರಾಹ್ಮಣರ ಓಣಿ ಮೊದಲಾದ ಪ್ರದೇಶಗಳಲ್ಲಿ ಮನೆಗಳು ಜಖಂಡಗೊಂಡಿವೆ.