ಅಬುದಾಬಿ ನ್ಯಾಶನಲ್ ಆಯಿಲ್ ಕಂಪನಿಯ ಮಾರುಕಟ್ಟೆ ನಿರ್ದೇಶಕ ಅಬ್ದುಲ್ಲಾ ಸಲೀಂ ಅಲ್ ದಹೇರಿ ಮಾತನಾಡಿ, ಸದ್ಯಕ್ಕೆ ಮಂಗಳೂರಿನಲ್ಲಿ ಕಚ್ಚಾತೈಲ ಸಂಗ್ರಹಿಸಲು ಕಂಪನಿ ನಿರ್ಧರಿಸಿದೆ. ಪಾದೂರು ಸಂಗ್ರಹಾಗಾರವನ್ನು ಇನ್ನಷ್ಟೇ ವೀಕ್ಷಿಸಲಿದ್ದು, ಭಾರತ ಸರ್ಕಾರ ಹಾಗೂ ಯುಎಇ ಸರ್ಕಾರಗಳು ನಿರ್ಧರಿಸಿದಲ್ಲಿ ಅಲ್ಲಿಯೂ ತೈಲ ಸಂಗ್ರಹಣೆ ಮಾಡಬಹುದಾಗಿದೆ. ಈ ಕುರಿತು ಇದುವರೆಗೆ ಯಾವುದೇ ತೀರ್ಮಾನ ಆಗಿಲ್ಲ ಎಂದು ತಿಳಿಸಿದರು.