‘ಮುಚ್ಚಳ ಚಿಕ್ಕದಾಗಿದ್ದರಿಂದ, ಒಳಗೆ ಗಾಳಿಯೇ ಇರಲಿಲ್ಲ. ಯಲ್ಲೋಜಿಯವರು ಉಸಿರಾಡಲಾಗದೆ ಅಸ್ವಸ್ಥಗೊಂಡು ಸಂಪ್ನಲ್ಲೇ ಕುಸಿದು ಬಿದ್ದಿದ್ದರು. ಅದನ್ನು ಗಮನಿಸಿದ ರಜನಿ, ಅಗ್ನಿಶಾಮಕ ದಳದ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿದ್ದ ದಳದ ಸಿಬ್ಬಂದಿ, ಯಲ್ಲೋಜಿಯವರನ್ನು ಹೊರಗೆ ತೆಗೆದು ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು, ಮೃತಪಟ್ಟಿರುವುದಾಗಿ ಹೇಳಿದರು’ ಎಂದರು.