ಎಚ್ಚೆತ್ತುಕೊಳ್ಳದ ಸ್ಥಳೀಐ ಆಡಳಿತ–ಆರೋಪ: ‘ದಾವಣಗೆರೆ, ಹೊಸಪೇಟೆ, ಚಳ್ಳಕೆರೆ, ಬಳ್ಳಾರಿ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ವಾರದ ಸಂತೆಯಿಂದ ತೊಂದರೆಯಾಗಿದೆ. ಸಂತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಚನ್ನಕೇಶವಮೂರ್ತಿ ದೂರುತ್ತಾರೆ. ಸಂತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ.