ಬೆಂಗಳೂರು: ‘ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 24 ಗಂಟೆಗಳಲ್ಲಿ ರೈತರ ಸಲಮನ್ನಾ ಮಡುತ್ತೇನೆ’ ಎಂದು ಹೇಳಿಕೆ ನೀಡಿದ್ದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಒಂದು ದಿನ ಮೊದಲು ನೀಡಿರುವ ‘ಪೂರ್ಣ ಬಹುಮತ ಬಂದ್ರೆ ರೈತರ ಸಾಲಮನ್ನಾ ಎಂದಿದ್ದೆ’ ಎಂಬ ಹೇಳಿಕೆ ಈಗ ಟ್ರೋಲ್ ಆಗಿದೆ.
ಜೆಡಿಎಸ್–ಕಾಂಗ್ರೆಸ್ ‘ಮೈತ್ರಿ’ ಆದ ಬಳಿಕ, ಸಿಎಂ ಸ್ಥಾನ ನಾಮನಿರ್ದೇಶಿತರಾದ ಕುಮಾರಸ್ವಾಮಿ ಒಂದರ ಮೇಲೊಂದರಂತೆ ಮಠ, ಮಂದಿರ, ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಮಂಗಳವಾರ ಅವರು ಧರ್ಮಸ್ಥಳಕ್ಕೆ ತೆರಳಿ ಮಂಜುನಾಥಸ್ವಾಮಿ ದರ್ಶನ ಪಡೆದರು.
ದರ್ಶನದ ಬಳಿಕ, ಅಲ್ಲಿ ಸುದ್ದಿಗಾರರ ಜತೆ ಮಾತನಾಡಿದಾಗ ರೈತರ ಸಾಲಮನ್ನಾ ವಿಚಾರವಾಗಿ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಮೇಲಿನಂತೆ ಹೇಳಿಕೆ ನೀಡಿದ್ದಾರೆ. ಇದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗಿದೆ.
'Troll Haiklu' ಮಾಡಿರುವ ಪೋಸ್ಟ್ನಲ್ಲಿ ‘ಪೂರ್ಣ ಮಹುಮತ ಬಂದ್ರೆ ಸಾಲಮನ್ನಾ ಎಂದಿದ್ದೆ’ ಎಂಬ ಸಾಲು ಮೇಲಿದೆ. ರೈತರ ಸಾಲಮನ್ನಾ ಮಾಡೋದು ಡೌಟು? ಎಂಬ ಅಡಿ ಬರಹ ಇದೆ.
ಈ ಪೋಸ್ಟ್ಗೆ ‘ಕಪ್ ಮೇಲೆ ಕಪ್ ತಗೊಳ್ಳಿ ಕನ್ನಡಿಗರೆ’ ಎಂದು ಒಬ್ಬರು ಪ್ರತಿಕ್ರಿಯಸಿದ್ದರೆ, ಮತದೊಬ್ಬರು ರಾಧಿಕಾ ಎಂಬ ಹೆಸರು ಬರೆದು ನಗುವಿನ ಚಿಹ್ನೆ ಹಾಕಿದ್ದಾರೆ.
ಈ ಪೋಸ್ಟ್ಗೆ ಬಂದಿರುವ ಕಾಮೆಂಟ್ಗಳಲ್ಲಿ ವಿಜಯವಿಠಲ್ ಕಿನ್ನಾಲ ಎಂಬುವರು ಕುಮಾರಸ್ವಾಮಿ ಭಾವ ಚಿತ್ರದ ಪಕ್ಕ ‘ನಾನು ಮಣ್ಣಿನ ಮಗ’ ಎಂದು, ಕೆಳಗೆ ಎರೆಹುಳುವಿನ ಚಿತ್ರದ ಪಕ್ಕ ‘ನಾನ್ಯಾರ್ ಗುರು ದೇವೇಗೌಡರ ಮಗನಾ???’ ಎಂದಿರುವ ಪೋಸ್ಟನ್ನು ಹಾಕಿ, ಕಿಚಾಯಿಸಿದ್ದಾರೆ.
</p><p>* <strong>ಇವನ್ನೂ ಓದಿ...</strong></p><p><strong>* </strong><a href="http://www.prajavani.net/news/article/2018/05/22/574485.html"><strong>ಸಾಲಮನ್ನಾ ಮಾಡಲ್ಲ ಎನ್ನುವುದು ರೈತರಿಗೆ ದ್ರೋಹ ಮಾಡಿದಂತೆ : ಕೆ.ಎಸ್.ಈಶ್ವರಪ್ಪ</strong></a><br/> <strong>* <a href="http://www.prajavani.net/news/article/2018/05/22/574519.html">ಟ್ರೆಂಡಿಂಗ್ ಆದ who is Radhika?</a></strong></p></p>