‘ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಈ ವ್ಯವಸ್ಥೆ’ ಎಂದು ಅದು ಎಷ್ಟೇ ಬೊಬ್ಬಿರಿದರೂ ವಾಸ್ತವದಲ್ಲಿ ಅದು ತಾನು ಅಧಿಕಾರದಿಂದ ವಂಚಿತನಾಗದಿರಲು ಮಾಡಿರುವ ಉಪಾಯ ಅಷ್ಟೇ. ಯಾವುದೇ ಷರತ್ತಿಲ್ಲದೆ ನೀಡಿರುವ ಬೆಂಬಲ ಎಂದರೆ ಟೋಟಲ್ ಸರಂಡರ್ ಅಲ್ಲವೇ? ಈ ಟೋಟಲ್ ಸರಂಡರ್ ಅನ್ನು ಕುಮಾರಸ್ವಾಮಿಯವರು ಟೋಟಲ್ಲಾಗಿ ಬಳಸಿ ಲೋಕಾಯುಕ್ತವನ್ನು ಮರುಸ್ಥಾಪಿಸುವ ಧೈರ್ಯ ಮಾಡುವರೇ? ಅಂದಹಾಗೆ ‘ಸೂಪರ್ ಹೋಂ ಮಿನಿಸ್ಟರ್’ ಆಗಿದ್ದ ಕೆಂಪಯ್ಯನವರು ಈಗೇನು ಮಾಡುತ್ತಿರಬಹುದು?