ಬೆಂಗಳೂರು: ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ಓಪನ್ ಡೇ 2018 ತಾಂತ್ರಿಕ ವಸ್ತುಪ್ರದರ್ಶನ’ದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಮಾದರಿಗಳನ್ನು ಪ್ರದರ್ಶಿಸಲಾಯಿತು.
ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ವಸ್ತುಪ್ರದರ್ಶನದಲ್ಲಿ ಎಲೆಕ್ಟ್ರಾನಿಕ್ ವಿಭಾಗದವರು ತಯಾರಿಸಿದ್ದ ‘ಸಿಗ್ನಲ್ನಲ್ಲಿ ಅತ್ಯುತ್ತಮ ಟ್ರಾಫಿಕ್ ನಿರ್ವಹಣೆ’ ಪ್ರಾತ್ಯಕ್ಷಿಕೆಗೆ ಮೊದಲ ಪ್ರಶಸ್ತಿ ದೊರೆತಿದೆ.