ಸಿದ್ದಗಂಗಾ ಶ್ರೀಗಳ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪೂರ್ಣ ಬಹುಮತ ಬಾರದ ಪ್ರಯುಕ್ತ ಮೈತ್ರಿ ಸರ್ಕಾರ ರಚಿಸಲಾಗಿದೆ. ಆದರೆ, ನಾಳೆ ಬಹುಮತ ಸಾಬೀತು ಪಡಿಸುವರೆರೆಗೆ ತಾಳ್ಮೆಯಿಂದ ಕಾಯಿರಿ. ಪ್ರತಿ ಪಕ್ಷಕ್ಕೆ ಸದನದಲ್ಲಿ ಉತ್ತರ ಕೊಡುವೆ. ಮಾಧ್ಯಮಗಳ ಮುಂದೆಯೂ ನನ್ನ ಭಾವನೆ ಹಂಚಿಕೊಳ್ಳುವೆ’ ಎಂದರು.