ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ನಗರದಲ್ಲಿ ಎಳನೀರಿಗೆ ತೀವ್ರ ಕೊರತೆ

Last Updated 25 ಮೇ 2018, 3:11 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರಿನಲ್ಲಿ ನಿಫಾ ವೈರಸ್‌ ಭೀತಿ ಬಹುತೇಕ ದೂರವಾಗುವ ಲಕ್ಷಣ ಕಾಣಿಸುತ್ತಿದ್ದಾಗಲೇ ದಾಹ ತೀರಿಸುವ ಎಳನೀರಿಗೆ ಬರ ಉಂಟಾಗಿರುವುದು ಕಂಡುಬಂದಿದೆ.

ಬೆಳಿಗ್ಗೆ ಹೊತ್ತು ನಗರದ ಹಲವೆಡೆ ಎಳನೀರು ಸಿಗುತ್ತದೆ. ಮಧ್ಯಾಹ್ನದ ನಂತರ ಎಲ್ಲೆಡೆ ಎಳನೀರಿಗೆ ಬರ ಕಾಣಿಸುತ್ತಿದೆ. ಅದೆಷ್ಟೋ ಕಡೆಗಳಲ್ಲಿ ಎಳೆನೀರಿಗಾಗಿ ಜನರು ಅಲೆದಾಡುವ ಪರಿಸ್ಥಿತಿ ಕಾಣಿಸುತ್ತಿದೆ.

‘ಚಿಕ್ಕಮಗಳೂರು ಭಾಗದಲ್ಲಿ ಅಕಾಲಿಕ ಮಳೆಯಾಗಿರುವುದರಿಂದ ಎಳನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಕರಾವಳಿ ಭಾಗದಲ್ಲಿ ಇದೀಗ ತೆಂಗಿನಕಾಯಿ ಬೆಲೆ ಗಗನಕ್ಕೆ ಏರಿರುವುದರಿಂದ ಎಳನೀರು ತೆಗೆಯುವುದಕ್ಕೆ ಕೃಷಿಕರು ಮನಸ್ಸು ಮಾಡುತ್ತಿಲ್ಲ’ ಎಂದು ಉರ್ವ ಭಾಗದ ಎಳನೀರು ವ್ಯಾಪಾರಿಯೊಬ್ಬರು ಹೇಳಿದರು.

ರಂಜಾನ್‌ ಮಾಸದ ಸಂದರ್ಭದಲ್ಲಿ ಉಪವಾಸ ಬಿಡುವ ಸಂಜೆ ಹೊತ್ತಲ್ಲಿ ಹಣ್ಣುಗಳ ಜತೆಗೆ ಎಳನೀರಿಗೂ ಬಹಳ ಬೇಡಿಕೆ ಇದೆ. ಆದರೆ ನಗರದ ಹಲವೆಡೆ ಅದರ ಕೊರತೆ ತೀವ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT